Log In | Join Now
Home arrow Vedike arrow Odugara Vedike arrow kannada Sammelagalige Spandisi Horata Maduva Chala Beku
kannada Sammelagalige Spandisi Horata Maduva Chala Beku Print
Written by jayashree   
ಆನೇಕಲ್ : ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಬಲಪಡಿಸಲು ಸ್ಥಾಯಿ ನಿಧಿಯನ್ನು ಸ್ಥಾಪಿಸಬೇಕಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಡಾ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ಅವರು ಆನೇಕಲ್ಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯಾದ್ಯಂತ ಎಲ್ಲ ಮತದಾರರನ್ನು ಭೇಟಿ ಮಾಡಿ ಗಡಿ ಭಾಗ, ನೆಲ, ಜಲ ಹಾಗೂ ಸಂಸ್ಕೃತಿಯನ್ನು ಬಲಪಡಿಸುವ ಬಗ್ಗೆ ಅನೇಕ ಸಲಹೆಗಳು ಬಂದಿದ್ದು ಅದನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.


ಪರಿಷತ್ತಿನ ಅಧ್ಯಕ್ಷ ಪದವಿ ತುಂಬಾ ಜವಾಬ್ದಾರಿಯುತವಾಗಿದ್ದು, ಕನ್ನಡ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುವ ಛಲ ಇರಬೇಕಿದೆ. ಆ ನಿಟ್ಟಿನಲ್ಲಿ ಕೆಲವು ಅಂಶಗಳನ್ನು ಗುರುತಿಸಿಕೊಂಡಿದ್ದು, ಯುವ ಪ್ರತಿಭೆಗಳಿಗೆ ಪ್ರತ್ಯೇಕ ಸಮ್ಮೇಳನ, ಪುಸ್ತಕ ಪ್ರಕಟಣೆಗೆ ಅವಕಾಶ ಕಲ್ಪಸಿಕೊಡುವ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಗಳಲ್ಲಿ ಪ್ರಸ್ತಾಪ ಇಡುವುದಾಗಿ ತಿಳಿಸಿದರು.


ಐಟಿ ಬಿಟಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಗ್ರಾಮಾಂತರ ಪ್ರದೇಶಗಳಿಗೆ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆ, ಉದಯೋನ್ಮುಖ ಬರಹಗಾರರಿಗೆ ಆದ್ಯತೆ ನೀಡಲು ಶ್ರಮಿಸುವುದಾಗಿ ತಿಳಿಸಿದರು.


ಸಂಗ್ರಹ:http://www.kannadaprabha.com

Comments (1) >>
...
written by ಮಂಜುನಾಥ ಗೌಡ, August 22, 2008

ಐಟಿ ಬಿಟಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ,
ಕನ್ನಡಿಗರು ಯಾವತ್ತು ಒಬ್ಬರ ಅಡಿಯಾಳಾಗಿ ಜೀವನ ಸಾಗಿಸಲು ಇಷ್ಟ ಪಡೋಲ್ಲ ( ಇದು ನಾನು ತುಂಬಾ ಜನರಿಂದ ಕೇಳಿರುವ ವಿಷಯ, ಅವರೆಲ್ಲ ಕನ್ನಡಿಗರು ಎನ್ನೋದು ಕೂಡ ಸತ್ಯ) ಕನ್ನಡಿಗರು ತಮ್ಮ ಸ್ವಂತ ಕಾಲಿನ ಮೇಲೆ ನಿಟ್ಟು ಜೀವನ ಸಾಗಿಸಲು ಬಯಸುವವರು. ಹೀಗಿರುವಾಗ ಯಾರು ತಾನೇ ಐ.ಟಿ ಮತ್ತು ಬಿ.ಟಿ ಗಳಲ್ಲಿ ಕೆಲಸ ಮಾಡಲು ಇಚ್ಚಿಸ್ತಾರೆ.

Write comment

busy