Log In | Join Now
Home arrow Vedike arrow Odugara Vedike arrow Indu Shishunala Sharifara Punyaradhane
Indu Shishunala Sharifara Punyaradhane Print
Written by jayashree   
ಹಾವೇರಿ: ಶಿಗ್ಗಾಂವ ತಾಲೂಕು ಶಿಶುವಿನಾಳದಲ್ಲಿ ಗುರುವಾರ ಶಿಶುನಾಲ ಶರೀಫ್ ಶಿವಯೋಗಿಗಳ ೧೮೯ನೇ ಜಯಂತಿ ಹಾಗೂ ೧೧೯ನೇ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ.

ಶರೀಫ್ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.


ಶಿಶುವಿನಾಲದಲ್ಲಿ ಸರ್ಕಾರ ಶರೀಫ್ ಸಾಹೇರ ಹೆಸರಿನಲ್ಲಿ ಸ್ಮಾರಕ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ೭೦ ಲಕ್ಷ ರು. ಬಿಡುಗಡೆ ಮಾಡಿದೆ. ಈ ಹಣದಲ್ಲಿ ಮ್ಯೂಸಿಯಂ, ಸಂಶೋಧನಾ ಕೇಂದ್ರ ಮತ್ತು ಗ್ರಂಥಾಲಯ ನಿರ್ಮಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಶರೀಫ್ ಸಾಹೇಬರ ತತ್ವಪದಗಳ ಪ್ರಕಟಣೆಗಾಗಿ ಸರ್ಕಾರ ೩೦ ಲಕ್ಷ ರು. ಬಿಡುಗಡೆ ಮಾಡಿದೆ. ಈ ಹಣದಲ್ಲಿ ದೇಶದ ವಿವಿಧ ಭಾಷೆಗಳಲ್ಲಿ ಶರೀಫರ ತತ್ಪಪದಗಳ ಸಿಡಿ, ಗ್ರಂಥ ಸಿದ್ಧಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸರ್ಕಾರದಿಂದ ಒಟ್ಟು ಒಂದು ಕೋಟಿ ರು. ಮಂಜೂರಾಗಿದ್ದು, ಇನ್ನೊಂದು ವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಎಲ್ಲ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದೆ.


 ಗುರುವಾರ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ವಹಿಸಲಿದ್ದು, ಟ್ರಸ್ಟ್ ಹಿರಿಯ ಸದಸ್ಯ ಹನುಮಂತಪ್ಪ ಜವಳಿ ಉದ್ಘಾಟಿಸುವರು.

 


ಸಂಗ್ರಹ: http://www.kannadaprabha.com

 

Comments (0) >>
Write comment

busy