Sahitya Suddi
Sahitya suddi
Sahitya Parishat Gadduge yaara Palige | Sahitya Parishat Gadduge yaara Palige |
|
| Written by jayashree | |
|
ಚುನಾವನೆಗೆ ಅಖಾಡ ಸಜ್ಜಾಗಿದೆ. ’ಸಾರಸ್ವತ ಲೋಕದ ಜಟ್ಟಿಗಳು’ ವಿವಿಧ ಪಟ್ಟುಗಳನ್ನು ಹಾಕಿ ಚುನಾವಣಾ ಕುರುಕ್ಷೇತ್ರಕ್ಕಿಳಿದು ಸಜ್ಜಾಗಿದ್ದಾರೆ. ಅಧ್ಯಕ್ಷ ಗಾದಿಗೇರಲು ಅಭ್ಯರ್ಥಿಗಳು ಹರಸಾಹಸ ನಡೆಸುತ್ತಿದ್ದು, ಈಗಾಗಲೇ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಮತದಾರರ ಓಲೈಕೆ ಕಾರ್ಯ ಮುಗಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಲ್ಲೂರು ಪ್ರಸಾದ್, ವೀರಣ್ಣ ಹಾಗೂ ವಿದ್ಯಾಶಂಕರ್ ಅವರು ಮುಂಚೂಣಿಯಲ್ಲಿರುವ ಅಭ್ಯರ್ಥಿಗಳು. ತಮ್ಮ ಸ್ಥಳೀಯ ಪ್ರಭಾವವನ್ನು ಬಳಸಿ ಮತದಾರರನ್ನು ಸೆಳೆಯುವಲ್ಲಿ ಇವರೆಲ್ಲಾ ಪ್ರಯತ್ನ ನಡೆಸಿದ್ದಾರೆ. ಈ ಮೂವರನ್ನು ಹೊರತುಪಡಿಸಿದಂತೆ ಮ.ಚಿ. ಕೃಷ್ಣಾ, ಜಿ. ವಿ. ಪ್ರಭಾಕರ್ ರಾವ್, ಲಕ್ಷ್ಮಣರಾವ್ ಗೋಗಿ, ಸೋಸಲೆ ಜವರಯ್ಯ ಕಣದಲ್ಲಿರುವ ಇತರ ಅಭ್ಯರ್ಥಿಗಳು.
|