Sahitya Suddi
Sahitya suddi
Hampanage Jaina Sahitya Prashasti Pradana | Hampanage Jaina Sahitya Prashasti Pradana |
|
| Written by jayashree | |
|
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ, ಜೈನ ಧರ್ಮ ಅಹಿಂಸಾ ಧರ್ಮವನ್ನು ಪಾಲಿಸಿಕೊಂಡು ಬರುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಂಸಾಹಾರಿಯಾಗಿದ್ದ ತಾವು ಜೈನ ಸಮುದಾಯದ ಸ್ನೇಹಿತರ ಸಹವಾಸದಿಂದ ಸಸ್ಯಾಹಾರಿಯಾಗಿ ಬದಲಾದ ಬಗ್ಗೆ ವಿವರಿಸಿ, ಇದಕ್ಕೆ ಜೈನ ಸಮುದಾಯದ ಅಹಿಂಸಾ ತತ್ವ ಪ್ರತಿಪಾದನೆಯೇ ಕಾರಣವಾಯಿತು ಎಂದರು. ಸಚಿವ ಡಿ. ಸುಧಾಕರ್ ಮಾತನಾಡಿ, ಹಂಪ ನಾಗರಾಜಯ್ಯ ಅವರನ್ನು ನವಯುಗದ ಪಂಪ ಎಂದು ಬಣ್ಣಿಸಿದರಲ್ಲದೆ, ಅಹಿಂಸೆ ಮತ್ತು ತ್ಯಾಗವೆಂಬ ಜೈನ ಧರ್ಮದ ಸಿದ್ಧಾಂತ ಮಾನಸಿಕ ನೆಮ್ಮದಿ ತಂದು ಕೊಡುತ್ತದೆ ಎಂದು ಹೇಳಿದರು. ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾರಾಜೇಂದ್ರ ಶರಣರು ಹಾಗೂ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮೂಡಬಿದರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮಿ ಸಾದ್ವಿ ಸ್ವರ್ಣರೇಖಾಜಿ, ಡಾ| ನಿರ್ವಾಣ ಪ್ರಜ್ಞಾಜಿ, ಪ್ರೊ| ಕಮಲಾ ಹಂಪನಾ ಭಾಗವಹಿಸಿದ್ದರು.
|