Sahitya Suddi
Sahitya suddi
Beelagiyalli Vachanagayanotsava Upanyasa | Beelagiyalli Vachanagayanotsava Upanyasa |
|
| Written by jayashree | |
|
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಂಧ ಕಲಾವಿದ ಸುಭಾಸ್ ಪಾಟೀಲ ಮಾತನಾಡಿ, ನಮಗೆ ಕಣ್ಣಿಲ್ಲ, ದೃಷ್ಠಿಯಿದೆ. ನಮ್ಮನ್ನು ಹಾಗೂ ನಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ ಎಂದು ಕಣ್ಣಿರುವ ಶ್ರೀಮಂತರನ್ನು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದಾಗ ಸಭೆಯಲ್ಲಿದ್ದವರ ಕಣ್ಣಂಚಲ್ಲಿ ನೀರು ಜಿನುಗಿತು. ಡಾ. ಶ್ರೀ ರಾಮ ಇಟ್ಟಣ್ಣವರ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಠಿ ಹನುಮಂತರಾಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧಪ್ಪ ಬೆಣ್ಣಿರೊಟ್ಟಿ, ನೂರಲಿ, ತಹಸೀಲ್ದಾರ ಇತರದು ಇದ್ದರು.
|