Sahitya Suddi
Sahitya suddi
Aaluru Venkatarayaru (july 13 1880 | Aaluru Venkatarayaru (july 13 1880 |
|
| Written by jayashree | |
|
ಆಲೂರು ವೆಂಕಟರಾಯರು ಕ್ರಿ.ಶ. ೧೮೮೦ನೆಯ ಜುಲೈ ೧೩ ಆಷಾಢ ಶುದ್ಧ ಪಂಚಮಿಯ ದಿನ ವಿಜಾಪುರದಲ್ಲಿ ಜನ್ಮ ತಾಳಿದರು.
ವೆಂಕಟರಾಯರ ತಂದೆ ಭೀಮರಾವ್ ಆಲೂರ, ತಾಯಿ ಭೀಮರಾವ್ ಆಲೂರ, ತಾಯಿ ಭಾಗೀರಥಿ ಬಾಯಿ ಇವರ ಹಿರಿಯಮಗ ವೆಂಕಟರಾಯರು. ಇವರ ಹೆಸರು ವೆಂಕಟೇಶನೆಂದು. ಧಾರವಾಡ ಜಿಲ್ಲೆಯ ಹೊಳೆಆಲೂರ ಗ್ರಾಮವು ಇವರ ವಂಶದವರಿಗೆ ಜಹಗೀರಿಯಾಗಿ ದೊರೆತ್ತಿತ್ತು. ಆದುದರಿಂದ ಇವರ ಮನೆತನಕ್ಕೆ ’ಆಲೂರ ಮನೆತನ’ ಎಂಬ ಹೆಸರು ಬಂದಿತ್ತು.
ಮನೆಯಲ್ಲಿಯೇ ಸಂಸ್ಕೃತವನ್ನು ಕನ್ನಡವನ್ನೂ ಕಲಿತರು. ಏಳನೆ ವಯಸ್ಸಿನಲ್ಲಿ ಶಾಲೆಗೆ ಸೇರಿದರು. ಇವರ ತಂದೆಯವರಿಗೆ ಊರಿಂದೂರಿಗೆ ವರ್ಗವಾಗುತ್ತಿದ್ದುದರಿಂದ ಇವರ ವಿದ್ಯಾಭ್ಯಾಸ ಗದಗು, ಹಾನಗಲ್ಲಿ ನಡೆಯಿತು.
ಹೈಸ್ಕೂಲಿಗೆ ಧಾರವಾಡದ ಶಾಲೆ ಸೇರಿದರು. ಹೈಸ್ಕೂಲಿನಲ್ಲಿ ಮರಾಠಿ ಮತ್ತು ಇಂಗ್ಲೀಷ ಭಾಷೆಗಳೂ ಪ್ರಮುಖವಾದ ಮುಂದಿನ ವರ್ಷ ಆಲೂರರು ಪುಣೆಯ ಫರ್ಗೂಸನ್ ಕಾಲೇಜ್ ಸೇರಿದರು. ಅಲ್ಲಿ ಆಲೂರರ ಸಹಪಾಠಿಗಳೂ ಮುಂದೆ ಬಹುಪ್ರಸಿದ್ದರಾದ ವೀರಸಾವರ್ಕರ್, ಸೇನಾಪತಿ ಬಾಪೆಟ್ ಮುಂತಾದವರು. ಆಲೂರರು ನಾಲ್ಕು ವರ್ಷಗಳ ಕಾಲ ವಿಧ್ಯಾಭ್ಯಾಸ ನಡೆಸಿ ಬಿ ಎ ಎಲ್ ಎಲ್ ಬಿ ಪದವಿಯನ್ನು ಪಡೆದರು.
ಆಲೂರು ವೆಂಕಟರಾಯರು ’ಕೇಸರಿ’ ಪತ್ರಿಕೆಯನ್ನು ಮರಾಠಿಯಲ್ಲಿ ನಡೆಸುತ್ತಿದ ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ೧೯೦೨ರಲ್ಲಿ ಭೇಟಿಯಾದರು. ಅಂದಿನ ಪರಿಚಯದಿಂದಾಗಿ ಬಾಲಗಂಗಾಧರ ತಿಲಕರು ಜೀವಿಸಿದಷ್ಟೂ ಕಾಲವೂ ಇವರಿಬ್ಬರ ಸ್ನೇಹ ಮುಂದುವರೆಯಿತು. ಅಷ್ಟೇ ಅಲ್ಲ ತಿಲಕರು ಕಾಂಗ್ರೆಸ್ಸಿನ ಸೂರತ್ ಅಧಿವೇಶನದಲ್ಲಿ ಆಲೂರರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ಸ್ನೇಹದ ಗುರುತಾಗಿ ತಿಲಕರು ಮರಾಠಿಯಲ್ಲಿ ಬರೆದ ಗೀತಾರಹಸ್ಯವನ್ನು ಆಲೂರು ಕನ್ನಡಕ್ಕೆ ಅನುವಾದ ಮಾಡಿದರು.
ಬಿ.ಎ.ಎಲ್.ಎಲ್.ಬಿ.. ಪರೀಕ್ಷೆ ಮುಗಿಸಿದ ಆಲೂರರು ಧಾರವಾಡಕ್ಕೆ ಬಂದು ವಕೀಲಿ ವೃತ್ತಿಯನ್ನು ಆರಂಭಿಸಿದರು. ಆದರೆ ಅವರು ವಕೀಲಿ ವೃತ್ತಿಯನ್ನು ಹೆಚ್ಚುಕಾಲ ನಡೆಸಲಿಲ್ಲ. ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟ ಮೇಲೆ ಚಳುವಳಿಯನ್ನು ಪ್ರಾರಂಭಿಸಿದರು. ವಿದೇಶಿ ಬಟ್ಟೆಗಳ ಬದಲು ಸ್ವದೇಶಿ ಬಟ್ಟೆಯನ್ನು ಧರಿಸಲು ಪ್ರೇರಿಸಿದರು. ರಾಷ್ಟ್ರೀಯ ಶಿಕ್ಷಣ ಶಾಲೆಯನ್ನು ತೆರೆದರು. ಇದರಲ್ಲಿ ಭಾರತೀಯತ್ವವನ್ನೂ, ಸ್ವದೇಶಾಭಿಮಾನವನ್ನೂ ಭೋದಿಸಿದರು. ಕರ್ನಾಟಕಾಂತರ್ಗತ ಭಾರತಮಾತೆಗೆ ನಮಸ್ಕಾರ ಎಂಬ ಮಂತ್ರವನ್ನು ಘೋಷಿಸಿ ಕನ್ನಡದ ಶ್ರೇಯೋಭಿವೃದ್ಧಿಗೆ ದುಡಿದರು. ಕರ್ನಾಟಕದ ನವನಿರ್ಮಾಣ ಕಾರ್ಯದಲ್ಲಿ ಅಗ್ರಗಣ್ಯರಾದರು. ಕರ್ನಾಟಕ ತಿಲಕರಾದರು. ಕನ್ನಡ ಕುಲಪುರೋಹಿತರೆಂದು ಗೌರವಿಸಲ್ಪಟ್ಟರು.
ಸ್ವದೇಶಿ ಚಳವಳಿಯ ಕಾರಣದಿಂದ ಊರಿಂದ ಊರಿಗೆ ತಿರುಗುತ್ತಿದ್ದ ಆಲೂರರು ಆನೆಗೊಂದಿ, ಹಂಪಿಗಳನ್ನು ನೋಡಿದರು. ಅಂದಿನಿಂದ ಅವರು ಕರ್ಣಾಣಕತ್ವದ ತಪಸ್ಸನ್ನು ಕೈಗೊಂಡರು. ೧೯೦೭ರಲ್ಲಿ ’ವಾಗ್ಭೂಷಣ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗೆ ಶ್ರಮಿಸಿದ ಶ್ರೀವಿದ್ಯಾರಣ್ಯರನ್ನು ಕುರಿತು ಶ್ರೀ ವಿದ್ಯಾರಣ್ಯ ಚರಿತ್ರೆ ಎಂಬ ಸಣ್ಣ ಪುಸ್ತಕವನ್ನು ಪ್ರಕಟಿಸಿದರು. ನರಗುಂದ ರಾಮರಾಯರೊಡನೆ ಸೇರಿ ’ಕನ್ನಡಿಗರ ಭ್ರಮನಿರಸನ’ ಎಂಬ ನಾಟಕವನ್ನು ರಚಿಸಿದರು. ’ಕರ್ನಾಟಕ ಗತವೈಭವ’ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದರು. ಈ ಎಲ್ಲ ಗ್ರಂಥಗಳೂ ಕನ್ನಡಿಗರನ್ನು ಎಚ್ಚರಿಸಿತು. ’ಕರ್ನಾಟಕ ಗತವೈಭವ’ ಅವರು ಇಂಗ್ಲೀಷ್ನಲ್ಲಿ ಮಾಡಿದ ಭಾಷಣವನ್ನು ಆಧರಿಸಿ ಕನ್ನಡದಲ್ಲಿ ರಚಿತವಾಯಿತು.
ಇವರು ದಿನಾಂಕ ೨೫-೨-೧೯೬೪ ರಂದು ದೈವಾಧೀನರಾದರು. ಸಂಗ್ರಹ: http: habba mattu dinacharane |