Log In | Join Now
Home arrow Sahitya Suddi arrow Sahitya suddi arrow 18 Puranagala Kannadanuvada Bidugade
18 Puranagala Kannadanuvada Bidugade Print
Written by jayashree   

ಬೆಂಗಳೂರು: ಜನರಿಗೆ ಹೆಚ್ಚು ಹೊರೆಯಾಗದ ತೆರಿಗೆ ವ್ಯವಸ್ಥೆ ಜಾರಿಗೆ ಬರಬೇಕಾದ ಅಗತ್ಯವಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.


ಭಾನುವಾರ ನಗರದಲ್ಲಿ ಪಂಡಿತ ಪಂಢರೀನಾಥ ರಾಚಾರ್ಯ ಗಲಗಲಿ ಅವರ ’ಅಷ್ಟಾದಶ’ ಗ್ರಂಥ ಸಂಪುಟವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶ್ರ್‍ಈ ವಿಶ್ವೇಶತೀರ್ಥರು, ಪುಷ್ಪದಿಂದ ಜೇನು ಮಕರಂದ ಹೀರುವಂತೆ ಜನರಿಗೆ ಹೊರೆಯಾಗದ ತೆರೆಗೆ ವ್ಯವಸ್ಥೆ ಇರಬೇಕೆಂದು ಮಹಾಭಾರತ ಹೇಳುತ್ತದೆ. ಆದರೆ, ಇಂದು ಸರ್ಕಾರಗಳ ವ್ಯವಸ್ಥೆ ಜಿಗಣೆಯಂತೆ ಜನರನ್ನು ಹೀರುತ್ತಿದೆ ಎಂದರು.

ಪಂಢರೀನಾಥಚಾರ್ಯ ಅವರ ಈ ಕೃತಿ ಪ್ರಾಚೀನ ಭಾರತದ ಸಮಗ್ರ ದರ್ಶನ ಮಾಡಿಸುವ ಅಪರೂಪದ ಗ್ರಂಥ. ಜತೆಗೆ ಭಾರತದಲ್ಲಿ ಮುಂದೆ ಏನೆಲ್ಲ ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಬಿಂಬ ಇಲ್ಲದಿದ್ದರೂ ಪ್ರತಿಬಿಂಬ ತೋರುವುದೇ ಪುರಾಣ. ಸಾಂಸ್ಕೃತಿಕ ಪರಂಪರೆ ಬೆಳೆದು ಬರುವುದಕ್ಕೆ ಇದು ಕಾರಣವಾಗಿದೆ ಎಂದು ತಿಳಿಸಿದರು.


ಕನ್ನಡ ಮತ್ತು ಸಂಸ್ಕೃತ ಎರಡಲ್ಲೂ ಪರಿಪೂರ್ಣ ವಿದ್ವತ್ ಹೊಂದಿರುವ ಗಲಗಲಿ ಸಂಸ್ಕೃತದಲ್ಲಿ ವೇದವ್ಯಾಸರು ರಚಿಸಿರುವ ೧೮ ೧೮ ಮಹಾಪುರಾಣಗಳನ್ನು ಕನ್ನಡದಲ್ಲಿ ಹೊರತಂದು ನಾಡು-ನುಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ಸಾರಸ್ವತ ಪ್ರಪಂಚಕ್ಕೆ ಮತ್ತಷ್ಟು ಸೇವೆ ಸಲ್ಲಿಸಲಿ ಎಂದು ಹಾರೈಸಿದರು.


ಅಧ್ಯಕ್ಷತೆಯನ್ನು ಎಂ. ರಾಮಾಜೋಯಿಸ್ ವಹಿಸಿದ್ದರು. ರಾಜಾ ಎಸ್. ರಾಜಗೋಪಾಲಾಚಾರ್ಯ, ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ| ವಾದಿರಾಜಾಚಾರ್ಯ, ಶತಾವಧಾನಿ ಆರ್. ಗಣೇಶ್, ಖೋಡೆ ಪ್ರತಿಷ್ಠಾನದ ಎಲ್. ಶ್ರೀಹರಿ ಖೋಡೆ ಇದ್ದರು.


ಸಂಗ್ರಹ: http://www.kannadaprabha.com

Comments (0) >>
Write comment

busy