Home
Raashi Print
Written by MS Rajanikanth   

ra_shi_m_shivaram.jpg"ರಾಶಿ" - (೧೯೦೫-೧೯೮೪)
ಡಾ. ಎಂ. ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ; ೧೯೦೫ರ ನವೆಂಬರ್ ೧೧ರಂದು. ವೈದ್ಯಕೀಯ ಶಿಕ್ಷಣವನ್ನು ಪಡೆದ ಅವರು, ವೈದ್ಯಕೀಯ ವೃತ್ತಿಯನ್ನು ಬೆಂಗಳೂರಿನಲ್ಲಿ ಕೈಗೊಂಡರು. ಅವರ ಕಾವ್ಯನಾಮ ರಾಶಿ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ ಗ್ರಂಥಾಲಯದಲ್ಲಿ ಓದುವುದು ಅವರ ಹವ್ಯಾಸವಾಯಿತು. ಇಂಗ್ಲೀಷ್ ಪಂಚ್ (Punch) ಹಾಸ್ಯ ಸಾಪ್ತಾಹಿಕ ಅವರಿಗೆ ತುಂಬಾ ಇಷ್ಟವಾಯಿತು. ಅದರ ಪ್ರತಿಫಲವೆ ಕೊರವಂಜಿ ಕನ್ನಡ ಹಾಸ್ಯ ಮಾಸಪತ್ರಿಕೆ. ಹಲವು ವರ್ಷಗಳು ಅದನ್ನು ನಡೆಸಿದರು.

ರಾಶಿ ಅವರ ಮೊದಲ ಸಂಕಲನ ’ತುಟಿ ಮೀರಿದವರು’ - ೧೯೩೭ರಲ್ಲಿ ಪ್ರಕಟವಾಯಿತು. ಕೊರವಂಜಿ ಪತ್ರಿಕೆಯಲ್ಲಿ ಅವರ ಹಾಸ್ಯ ಲೇಖನಗಳು ಪ್ರಕಟವಾಗುತ್ತಿದ್ದವು. ಮುಂದೆ ಅವು ಸಮಗ್ರ ಸಂಪುಟದ ರೂಪದಲ್ಲಿ ಹೊರಬಂದವು. ಕೊರವಂಜಿ ಕಂಡ ನಗು ಸಮಾಜ, ಕೊರವಂಜಿ ಕಂಡ ನಗು ದರ್ಬಾರಿಗಳು, ಕೊರವಂಜಿ ಕಂಡ ನಗು ವ್ಯಕ್ತಿಗಳು ಇತ್ಯಾದಿಗಳು ಹೊತ್ತಗೆಗಳಲ್ಲಿ ಅವು ಪ್ರಕಟವಾದವು. ಕೆಣಕೋಣು ಬಾರ, ಜಗ್ಗೋಜಿ, ಥಳುಕುಥಣಕ, ಸಾಕ್ಷಿ ಸಂಕಲಿಕೆ, ಇಂದಾನೊಂದು ಕಾಲದಲ್ಲಿ, ನಗೆಗೆರೆ ಚಿತ್ರಗಳು, ನಗು ಬುದ್ದೋಜಿ, ಪಶ್ಯಾಮಿ ಕಥೆಗಳು, ಯೋಚಿಸಿದರೆ, ಪಂಪಾವತಿಯ ಕೃಪೆ, ಕಾರ್ತೀಕ, ನಗು ಸಂಸಾರಿಗರು ಮಧುವನದಲ್ಲಿ ಮೇಳ-ಇತ್ಯಾದಿ ನಗೆ ಸಂಕಲನಗಳನ್ನು ಹೊರತಂದರು. "ಪಂಪಾವತಿಯ ಕೃಪೆ" - ಕಾದಂಬರಿ. ಅವರ ಇತರ ಕೃತಿಗಳು: ಮನೋನಂದನ, ಭಯ-ಸರಳ ವಿಶ್ಲೇಷಣೆ, ಅಲರ್ಜಿ, ಮನುಮಂಥನ, ಮನನ ಇತ್ಯಾದಿ.
    ಇಂಗ್ಲೀಷ್‍ನಲ್ಲಿ 'Kailasam and I, Moral and Health, Ananda an Experience' ಮುಖ್ಯವಾದವುಗಳು. ರಾಶಿಯವರ ಹಾಸ್ಯ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳು ಬಂದವು. ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದವು. ೧೯೭೮-೮೦ರ ಅವಧಿಯಲ್ಲಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ರಾಶಿಯವರು ನಿಧನ ಹೊಂದಿದ್ದು ೧೯೮೪ರ ಜನವರಿ ೧೩ ರಂದು.

 

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ 


Books by this Author:

No books found. You can request a book here.
Comments (0) >>
Write comment

busy
 
Log In | Join Now
Request a book!