Log In | Join Now
KS Narasimhaswamy Print
Written by MS Rajanikanth   

ks_narasimhaswamy.jpg"ಕೆ.ಎಸ್. ನರಸಿಂಹಸ್ವಾಮಿ" - (೧೯೧೫)
    ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿಯವರು ಜನಿಸಿದ್ದು ೧೯೧೫ರ ಜನವರಿ ೨೬ರಂದು. ಮಂಡ್ಯ ಜಿಲ್ಲೆ ಕಿಕ್ಕೇರಿ ಅವರ ಹುಟ್ಟಿದೂರು. ತಂದೆ: ಸುಬ್ಬರಾಯರು, ತಾಯಿ: ನಾಗಮ್ಮ, ಪತ್ನಿ: ವೆಂಕಮ್ಮ.
    ಮೈಸೂರು- ಬೆಂಗಳೂರುಗಳಲ್ಲಿ ಅವರ ಶಿಕ್ಷಣ ನಡೆಯಿತು. ಆದರೆ ಪದವಿ ಪಡೆಯಲಾಗಲಿಲ್ಲ. ೧೯೩೭ರಲ್ಲಿ ಅವರು ಸರ್ಕಾರಿ ಸೇವೆಗೆ ಸೇರಿದರು.

ಕನ್ನಡದ ಸುಕುಮಾರ ಕವಿ ಎಂದೇ ಖ್ಯಾತರಾದ ನರಸಿಂಹಸ್ವಾಮಿ ಅವರ ಕಾವ್ಯ ಕೃಷಿ ಬಹುದೊಡ್ಡದು. ಅವರ ಮೊದಲ ಕವನ ಸಂಕಲನ ’ಮೈಸೂರು ಮಲ್ಲಿಗೆ’ ಪ್ರಕಟವಾದದ್ದು ೧೯೪೨ರಲ್ಲಿ. ಆನಂತರ ಅದು ೧೮ಕ್ಕೂ ಹೆಚ್ಚು ಮರು ಮುದ್ರಣಗಳನ್ನು ಕಂಡಿದೆ. ಅವರ ಕವನಗಳು ಜನಮಾನಸವನ್ನು ಹೊಕ್ಕಿ ಜನಪದೀಯವಾಗಿವೆ. ಐರಾವತ, ಉಂಗುರ, ಇರುವಂತಿಗೆ, ದೀಪದ ಮಲ್ಲಿ, ಶಿಲಾಲತೆ, ತೆರೆದ ಬಾಗಿಲು, ನವಪಲ್ಲವ, ಮಲ್ಲಿಗೆಯ ಮಾಲೆ, ದುಂಡು ಮಲ್ಲಿಗೆ, ಸಂಜೆ ಹಾಡು, ದಮಯಂತಿ ಇತ್ಯಾದಿ ಕವನ ಸಂಕಲನಗಳು. ಕೆಲವಾರು ಕೃತಿಗಳನ್ನು ಅವರು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವುಗಳೆಂದರೆ- ಮೀಡಿಯಾ, ಹಕಲ್ ಬರೀಫಿನ್ ಸಾಹಸಗಳು, ಸುಬ್ರಹ್ಮಣ್ಯ ಭಾರತಿ ಇತ್ಯಾದಿ.
    ಕೆ.ಎಸ್.ನ ಅವರನ್ನು ಅರಸಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು ಅನೇಕ. ೧೯೫೭ರಲ್ಲಿ ’ಶಿಲಾಲತೆ’ಗೆ ರಾಜ್ಯ ಸಂಸ್ಕೃತಿ ಖಾತೆ ಬಹುಮಾನ, ೧೯೭೭ರಲ್ಲಿ ’ತೆರೆದ ಬಾಗಿಲು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಡಿ.ಲಿಟ್. ದುಂಡುಮಲ್ಲಿಗೆ ಸಂಕಲನಕ್ಕೆ ಪಂಪ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಕೇರಳದ ಕವಿ ಕುಮಾರನ್ ಆರಾನ್ ಪ್ರಶಸ್ತಿ ಇತ್ಯಾದಿಗಳು.
    ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
    ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ಗೌರವ ಸದಸ್ಯತ್ವ ನೀಡಿದೆ.

 

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ 


Books by this Author:

Deepa Saalina Naduve
Haadu Hase
Comments (0) >>
Write comment

busy