Log In | Join Now
Home arrow Sahitya putagalu arrow Sahitya Kanmanigalu arrow Chandrashekhara Shastrigalu
Chandrashekhara Shastrigalu Print
Written by MS Rajanikanth   
"ಚಂದ್ರಶೇಖರ ಶಾಸ್ತ್ರಿಗಳು" - (೧೮೯೨-೧೯೯೭)
’ವ್ಯಾಕರಣ ತೀರ್ಥ’ರೆಂದೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳು ಜನಿಸಿದ್ದು ೧೮೯೨ರ ಜನವರಿ ೩ ರಂದು; ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ. ತಂದೆ ಹಿರೇಮಠದ ಪಟ್ಟದಯ್ಯ. ತಾಯಿ ಬಸಮ್ಮ. ಸಂಸ್ಕೃತ ಪಾಠಶಾಲೆಗಳಲ್ಲಿ ಶಿಕ್ಷಣ ಮುಂದುವರೆಸಿ ಕಲ್ಕತ್ತಾದಿಂದ ’ವ್ಯಾಕರಣ ತೀರ್ಥ’ ಪದವಿ ಪಡೆದರು.

೧೯೨೪ರಲ್ಲಿ ಯಾದಗಿರಿಯಲ್ಲಿ ಸಂಸ್ಕೃತ ಕಾಲೇಜು ಆರಂಭವಾಗಲು ಕಾರಣಕರ್ತರಾದರು. ಅದರ ಪ್ರಾಚಾರ್ಯರೂ ಆಗಿ ಸೇವೆ ಸಲ್ಲಿಸಿದರು. ಆನಂತರ ೧೯೩೧ರಲ್ಲಿ ಹುಬ್ಬಳ್ಳಿಗೆ ಬಂದ ಶಾಸ್ತ್ರಿಗಳು ಮೂರು ಸಾವಿರ ಮಠದ ಗಂಗಾಧರ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ನಂತರ ಪುನಃ ಯಾದಗಿರಿ ಕಾಲೇಜಿಗೆ ಹೋಗಿ ೧೯೪೮ರ ನಿವೃತ್ತಿಯಾಗುವವರೆಗೂ ಅಲ್ಲಿ ಸೇವೆ ಸಲ್ಲಿಸಿದರು.
ಸಂಸ್ಕೃತ ಪಂಡಿತರಾದರೂ ಚಂದ್ರಶೇಖರ ಶಾಸ್ತ್ರಿಗಳ ಸೇವೆ ಕನ್ನಡಕ್ಕೆ ಸಂದಿದೆ. ಅವರ ೧೫ ಕೃತಿಗಳು ಹಾಗು ನೂರಾರು ಲೆಖನಗಳು ಪ್ರಕಟಗೊಂಡಿವೆ. ಬಸವತತ್ವ ರತ್ನಾಕರ, ಕಾಡುಸಿದ್ಧೇಶ್ವರ ವಚನ, ಧಾರವಾಡದ ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ, ಮದನ ಮೋಹನ ಮಾಲವೀಯರ ಚರಿತ್ರೆ, ರಾಜಗಿರಿ, ಶಬರಶಂಕರ ಪಾರ್ಥಪುರುಷ, ಲಿಂಗಧಾರಣಾವೂ ವೇದ ಮಂತ್ರಗಳೂ, ಚಾಣಕ್ಯ ನೀತಿ ದರ್ಪಣ, ರೇಣುಕಿ ವಿಜಯ ಮೊದಲಾದವು.
೧೯೬೮ರಲ್ಲಿ ಬಸವತತ್ವ ರತ್ನಾಕರ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೩ರಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿಗಳು ಸಂದವು. ಸಂಶೋಧನೆಗೂ ’ಚಿದಾನಂದ’ ಪ್ರಶಸ್ತಿ ೧೯೯೬ರಲ್ಲಿ ಸಂದಿತು. ಅವರಿಗೆ ನೂರು ವರ್ಷ ತುಂಬಿದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ನೀಡಿ ಗೌರವಿಸಲಾಯಿತು.
೧೯೪೦ರಲ್ಲಿ ಧಾರವಾಡದಲ್ಲಿ ನಡೆದ ೨೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ವಿದ್ಯಾಲಂಕಾರ, ವಿದ್ಯಾವಾಗೀಶ ಅವರಿಗೆ ಸಂದ ಬಿರುದುಗಳು. ಕನ್ನಡನಾಡು-ನುಡಿಯ ಸೇವೆಯನ್ನು ಪ್ರೀತಿಯಿಂದ ಮಾಡಿದ ವ್ಯಾಕರಣ ತೀರ್ಥರು ನಿಧನ ಹೊಂದಿದ್ದು ೧೯೯೭ರ ಅಕ್ಟೋಬರ್ ೧೦ರಂದು.

 

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ 


Books by this Author:

No books found. You can request a book here.
Comments (0) >>
Write comment

busy