Home
Sahitya Chintane Print
Written by M.A.Kodandarama   

 ನಾವು ಇದೀಗ ಸುವರ್ಣ ಕರ್ನಾಟಕ ವರ್ಷವನ್ನಾಚರಿಸುತ್ತಿರುವುದು ಸರಿಯಷ್ಟೆ. ನಮ್ಮ ಪೂರ್ವಜರು ಕನ್ನಡದ ಜನ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಂಡ ಕನಸು ಮೂರ್ತ ರೂಪ ತಳೆಯುತ್ತಿದೆಯದರೂ ಇನ್ನೂ ಬಹಳಷ್ಟು ಕೆಲಸಗಳು ಈನಿಟ್ಟಿನಲ್ಲಿ ನಡೆಯಬೇಕಿವೆ. ಇಂದು ನಾವೆಲ್ಲರೂ ಕಳೆದ ೫೦ ವರ್ಷಗಳಿಂದ ಕನ್ನಡದ ಹಾದಿಯಲ್ಲಿ ನಡೆದ ಉತ್ತಮ ಕಾರ್ಯಗಳನ್ನು ಗುರುತಿಸಿ, ಅದಕ್ಕೆ ಕಾರಣಕರ್ತರಾದ ಮಹನೀಯರನ್ನು ಸ್ಮರಿಸಬೇಕಿದೆ. ಅದೇರೀತಿ, ಈಹಿಂದೆ ಮಾಡಿದ ತಪ್ಪುಗಳನ್ನು ಗುರುತಿಸಿ, ಇನ್ನೂ ನನಸಾಗದ ವಿಷಯಗಳ ಅವಲೋಕನ ಮಾಡಿ, ಬರುವ ವರ್ಷಗಳಲ್ಲಿ ಕನ್ನಡದ ಏಳ್ಗೆಗಾಗಿ ಏನೇನು ಕೆಲಸ ನಡೆಯಬೇಕೋ ಅದನ್ನು ಗುರುತಿಸಿ, ಅದರಲ್ಲಿ ಶ್ರಧ್ಧಾಪೂರ್ವಕವಾಗಿ ನಮ್ಮನ್ನು ತೊಡಗಿಸಿಕೊಳ್ಳಬೇಕಾದುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ.

ಕನ್ನಡ ಸಾಹಿತ್ಯ ಲೋಕಕ್ಕೊಂದು ನಮ್ಮ ಕಿರುಕಾಣಿಕೆ 

ಇಂದು ಸುಮಾರು ಐದು ಕೋಟಿಗೂ ಹೆಚ್ಚು ಇರುವ ಕನ್ನಡಿಗರು ಕರ್ನಾಟಕದಲ್ಲಲ್ಲದೆ ದೇಶದ ಹಾಗೂ ವಿದೇಶಗಳ ಅನೇಕ ಭಾಗಗಳಲ್ಲಿ ಹಂಚಿಹೋಗಿದ್ದಾರೆ. ಈ ಎಲ್ಲರಿಗೂ ಕನ್ನಡದ ಆಗುಹೋಗುಗಳ ಬಗ್ಗೆ ತಿಳಿಯುವ, ಅದರ ಏಳ್ಗೆಗಾಗಿ ಶ್ರಮಿಸುವ ಹಕ್ಕು ಇದೆ. ಅಂತರ್ಜಾಲದ ಈ ಯುಗದಲ್ಲಿ ದೂರದ ಗಣನೆ ಅಮುಖ್ಯ. ಎಲ್ಲಾದರೂ ಇರು, ಸುಖಶಾಂತಿಯಿಂದಿರು, ಕನ್ನಡದ ಬಗ್ಗೆ ಕಾಳಜಿ ಹೊಂದಿರು ಎಂದು ಆಶಿಸುವುದು ತಪ್ಪಾಗಲಾರದಲ್ಲವೇ?

ಸುವರ್ಣ ಕರ್ನಾಟಕದ ಈ ಸಂದರ್ಭದಲ್ಲಿ ನಾವೂಕೂಡ ಏನಾದರೊಂದು ಉತ್ತಮ ಕಾರ್ಯವನ್ನು ಮಾಡುವ ಅಭಿಲಾಶೆಯಿಂದ ನಮ್ಮ ಆಪ್ತರೊಂದಿಗೆ ಸಮಾಲೋಚಿಸಿದುದರ ಫಲವೇ ಈ ನಮ್ಮ ಹಾಗೂ ನಿಮ್ಮ ಯೂಲೂಪ್ ಸಂಸ್ಥೆ. ಕನ್ನಡಿಗರೆಲ್ಲೇ ಇರಲಿ, ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತಹ ವಿಷಯಗಳ ಬಗ್ಗೆ ತಿಳಿಯಲು, ತಿಳಿಸಲು ಮತ್ತು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಂತರ್ಜಾಲದ ಮೂಲಕ ಒಂದು ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿ. ಅದೇ ರೀತಿ, ಕನ್ನಡ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗಾಗಿ ಕನ್ನಡಿಗರು ಸದಾಕಾಲ ಚಿಂತನೆ ನಡೆಸುತ್ತಿರಬೇಕು, ಸಾಹಿತಿಗಳ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು, ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಈ ನಮ್ಮ ವೆಬ್-ಸೈಟ್ ಕನ್ನಡಿಗರ ಪ್ರಪಂಚಕ್ಕೊಂದು ಕಿರುಕಾಣಿಕೆಯಾಗಿ ಹೊರಹೊಮ್ಮುತ್ತಿದೆ.

ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಜನರು ಕನ್ನಡ ಪುಸ್ತಕಗಳ ಬಗ್ಗೆ ಆಸಕ್ತಿ ತೋರಿಸುವುದು, ಅವುಗಳನ್ನು ಕೊಂಡು ಓದುವುದು ಬಹಳ ಮುಖ್ಯ. ಪ್ರಪಂಚದ ಯಾವುದೇಮೂಲೆಯಲ್ಲಿರುವ ಕನ್ನಡಿಗರಿಗೆ, ಕನ್ನಡಪುಸ್ತಕಪ್ರಿಯರಿಗೆ ನೂತನ ಹಾಗೂ ಅವರಿಗಿಷ್ಟ್ವಾದ ಕನ್ನಡ ಪುಸ್ತಕಗಳನ್ನು ತಲುಪಿಸುವ ಕಾರ್ಯವನ್ನೂ ಕೂಡಾ ಈ ನಮ್ಮ ಸಂಸ್ಥೆ ಮಾಡಲು ಮುಂದಾಗಿದೆ. ಇದಕ್ಕೆ ಓದುಗರೆಲ್ಲರ ಹಾಗೂ ಕನ್ನಡಿಗರೆಲ್ಲರ ಸಹಕಾರ ಬಹಳ ಮುಖ್ಯ. ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಐಬಿಎಚ್ ಪ್ರಕಾಶನದ ಹಾಗೂ ಅದರ ಮಾಲೀಕರಾದ ಶ್ರೀಯುತ ಲಕ್ಷ್ಮೀನಾರಾಯಣ ಅಡಿಗರ ಪಾತ್ರ ಬಹಳ ಮಹತ್ವದ್ದಾಗಿದೆ. ಅವರಿಗೆ ನಮ್ಮ ಕೃತಜ್ಞತೆಗಳು. ನಿಮ್ಮೆಲ್ಲರ ಅಭಿಮಾನದಿಂದ, ಆಶೀರ್ವಾದದಿಂದ ನಾವು ಚಿರಂತರ ಕನ್ನಡದ ಏಳ್ಗೆಗಾಗಿ ಶ್ರಮಿಸುವಂತಾಗಲಿ ಎಂಬುದೇ ನಮ್ಮ ಆಶಯ.

"ಜಯಕರ್ನಾಟಕ ಜಯಕರ್ನಾಟಕ, ಜಯಕರ್ನಾಟಕ ಮಾತೆ,
ಜಯಗೀತೆ ಹಾಡಿ ಸುತರೆಲ್ಲ ಕೂಡಿ ವಂದಿಪೆವು ಜನ್ಮದಾತೆ...."
ಕನ್ನಡಿಗರೆಲ್ಲರ ತನು, ಮನ ಹಾಗೂ ಕಾರ್ಯಗಳಲ್ಲಿ ಸದಾಕಾಲ ಕನ್ನಡಗೀತೆ ಮೊಳಗುತ್ತಿರಲಿ.

ಮೃಗವಧೆ ಕೋದಂಡರಾಮ.
Comments (3) >>
...
written by Jaya, October 31, 2007

ಐಟಿ ನಗರಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ವಿವಿಧ ರಾಜ್ಯಗಳಿಂದ ಬಂದು ನೆಲೆಸಿರುವ ಜನರೇ ಹೆಚ್ಚು. ಒಂದು ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿನ ಕನ್ನಡಿಗರ ಸಂಖ್ಯೆ ಸುಮಾರು ಶೇ. ೪೮ರಷ್ಟು ಮಾತ್ರ. ಇನ್ನುಳಿದ ಶೇ. ೫೨ ರಷ್ಟು ಜನ ಹೊರಗಿನಿಂದ ಬಂದು ನೆಲೆಸಿರುವವರು. ಇವರಲ್ಲಿ ಬಹುತೇಕ ಜನ ವ್ಯವಹರಿಸುವುದು ಆಂಗ್ಲಭಾಷೆಯಲ್ಲಿಯೇ. ಈ ಪರಿಸ್ಥಿತಿಯಲ್ಲಿ ಕನ್ನಡದ ಉಪಯೋಗ ಎಷ್ಟು ಮಾತ್ರ ಸಾಧ್ಯ? ಅಭಿವೃದ್ಧಿಯೊಡನೆ ಸ್ಪರ್ಧೆಯನ್ನೆದುರಿಸಬ ೇಕಾಗುವುದು ಸಾಮಾನ್ಯವೇ. ಈ ಸ್ಪರ್ಧೆಯ ನಡುವೆಯೂ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ವಿವಿಧ ರೀತಿಯ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಸರ್ಕಾರಿ ಕಛೇರಿಗಳಲ್ಲಿ ಕನ್ನಡಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿರುವುದ ು, ಹೊರಗಿನಿಂದ ಬಂದ ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ತರಗತಿಗಳನ್ನು ನಡೆಸುವುದರ ಮೂಲಕ ಅವರೂ ಸಹ ಕನ್ನಡ ಕಲಿಯಲು ಅವಕಾಶ ಕಲ್ಪಿಸಿರುವುದು ಒಳ್ಳೆಯದೇ. ಆದರೂ ಈ ದಿಸೆಯಲ್ಲಿ ಇನ್ನು ಹೆಚ್ಚು ಪ್ರಯತ್ನದ ಅವಶ್ಯಕತೆ ಖಂಡಿತ ನಡೆಯಬೇಕಿದೆ. ಈಗೀಗ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುವುದರತ್ತಲೇ ಒಲವು ತೊರುತ್ತಿರುವುದು ವಿಷಾದವೇ ಸರಿ. ಹಾಗೆ ಅವರು ಬಯಸುವುದು ಒಂದು ನಿಟ್ಟಿನಲ್ಲಿ ತಪ್ಪಲ್ಲದಿದ್ದರೂ, ತಮ್ಮ ನಾಡ ಭಾಷೆಯನ್ನು ಮೊದಲು ಕಲಿಸುವುದರ ಬಗ್ಗೆ ಗಮನ ಕೊಡುವುದು ಒಳಿತು. ಇಂತಹ ಸ್ಥಿತಿಯಲ್ಲೂ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಿಸಿ "ಕನ್ನಡ ಯಾರ್ ಕೇಳ್ತಾರೆ?" ಎಂದು ಯೋಚಿಸದೆ ವಿನೂತನವಾಗಿ ಆರಂಭಗೊಂಡಿರುವ --------- ವೆಬ್‍ಸೈಟ್ ನಿಜಕ್ಕೂ ಅತ್ಯಂತ ಶ್ಲಾಘನೀಯ. ಕನ್ನಡ ಪುಸ್ತಕಗಳನ್ನು ಅದರ ಸಂಕ್ಷಿಪ್ತ ವಿವರಗಳೊಡನೆ ಅಂತರ್ಜಾಲದ ಮೂಲಕ ಕೊಳ್ಳ ಬಯಸುವವರಿಗಾಗಲೀ, ಸಾಹಿತ್ಯ ಸುದ್ದಿಗಳನ್ನು ಹಾಗೂ ಕನ್ನಡ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳ ಬಯಸುವವರಿಗಾಗಲೀ ಅತ್ಯಂತ ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿರುವ ಐ.ಬಿ.ಎಚ್. ಪ್ರಕಾಶನದ ಮಾಲೀಕರಾದ ಶ್ರೀ ಲಕ್ಷ್ಮೀನಾರಾಯಣ ಅಡಿಗರು ಹಾಗೂ ಯೂಲುಪ್.ಕಾಮ್ ಸಂಸ್ಥೆಯೂ ಅಭಿನಂದನಾರ್ಹರು. ಸಿರಿಗನ್ನಡಂ ಗೆಲ್ಗೆ!

...
written by Shree, October 31, 2007

ಮಾಹಿತಿ ತಾಂತ್ರಜ್ಞಾನ ನಗರಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ವಿವಿಧ ರಾಜ್ಯಗಳಿಂದ ಬಂದು ನೆಲೆಸಿರುವ ಜನರೇ ಹೆಚ್ಚು. ಒಂದು ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿನ ಕನ್ನಡಿಗರ ಸಂಖ್ಯೆ ಸುಮಾರು ಶೇ. ೪೮ರಷ್ಟು ಮಾತ್ರ. ಇನ್ನುಳಿದ ಶೇ. ೫೨ ರಷ್ಟು ಜನ ಹೊರಗಿನಿಂದ ಬಂದು ನೆಲೆಸಿರುವವರು. ಇವರಲ್ಲಿ ಬಹುತೇಕ ಜನ ವ್ಯವಹರಿಸುವುದು ಆಂಗ್ಲಭಾಷೆಯಲ್ಲಿಯೇ. ಈ ಪರಿಸ್ಥಿತಿಯಲ್ಲಿ ಕನ್ನಡದ ಉಪಯೋಗ ಎಷ್ಟು ಮಾತ್ರ ಸಾಧ್ಯ? ಅಭಿವೃದ್ಧಿಯೊಡನೆ ಸ್ಪರ್ಧೆಯನ್ನೆದುರಿಸಬ ೇಕಾಗುವುದು ಸಾಮಾನ್ಯವೇ. ಈ ಸ್ಪರ್ಧೆಯ ನಡುವೆಯೂ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ವಿವಿಧ ರೀತಿಯ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಸರ್ಕಾರಿ ಕಛೇರಿಗಳಲ್ಲಿ ಕನ್ನಡಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿರುವುದ ು, ಹೊರಗಿನಿಂದ ಬಂದ ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ತರಗತಿಗಳನ್ನು ನಡೆಸುವುದರ ಮೂಲಕ ಅವರೂ ಸಹ ಕನ್ನಡ ಕಲಿಯಲು ಅವಕಾಶ ಕಲ್ಪಿಸಿರುವುದು ಒಳ್ಳೆಯದೇ. ಆದರೂ ಈ ದಿಸೆಯಲ್ಲಿ ಇನ್ನು ಹೆಚ್ಚು ಪ್ರಯತ್ನದ ಅವಶ್ಯಕತೆ ಖಂಡಿತ ನಡೆಯಬೇಕಿದೆ. ಈಗೀಗ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುವುದರತ್ತಲೇ ಒಲವು ತೊರುತ್ತಿರುವುದು ವಿಷಾದವೇ ಸರಿ. ಹಾಗೆ ಅವರು ಬಯಸುವುದು ಒಂದು ನಿಟ್ಟಿನಲ್ಲಿ ತಪ್ಪಲ್ಲದಿದ್ದರೂ, ತಮ್ಮ ನಾಡ ಭಾಷೆಯನ್ನು ಮೊದಲು ಕಲಿಸುವುದರ ಬಗ್ಗೆ ಗಮನ ಕೊಡುವುದು ಒಳಿತು. ಇಂತಹ ಸ್ಥಿತಿಯಲ್ಲೂ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಿಸಿ "ಕನ್ನಡ ಯಾರ್ ಕೇಳ್ತಾರೆ?" ಎಂದು ಯೋಚಿಸದೆ ವಿನೂತನವಾಗಿ ಆರಂಭಗೊಂಡಿರುವ books.yulop.com ವೆಬ್‍ಸೈಟ್ ನಿಜಕ್ಕೂ ಅತ್ಯಂತ ಶ್ಲಾಘನೀಯ. ಕನ್ನಡ ಪುಸ್ತಕಗಳನ್ನು ಅದರ ಸಂಕ್ಷಿಪ್ತ ವಿವರಗಳೊಡನೆ ಅಂತರ್ಜಾಲದ ಮೂಲಕ ಕೊಳ್ಳ ಬಯಸುವವರಿಗಾಗಲೀ, ಸಾಹಿತ್ಯ ಸುದ್ದಿಗಳನ್ನು ಹಾಗೂ ಕನ್ನಡ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳ ಬಯಸುವವರಿಗಾಗಲೀ ಅತ್ಯಂತ ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿರುವ ಐ.ಬಿ.ಎಚ್. ಪ್ರಕಾಶನದ ಮಾಲೀಕರಾದ ಶ್ರೀ ಲಕ್ಷ್ಮೀನಾರಾಯಣ ಅಡಿಗರು ಹಾಗೂ ಯೂಲುಪ್.ಕಾಮ್ ಸಂಸ್ಥೆಯೂ ಅಭಿನಂದನಾರ್ಹರು. ಸಿರಿಗನ್ನಡಂ ಗೆಲ್ಗೆ!

...
written by ವಿಕಾಸ್, December 10, 2007

ನಿಜವಾಗಲೂ ಶ್ಲಾಘನೀಯ ಕೆಲಸ ಇದು. ಬಹಳ ಉಪಯುಕ್ತವಾಗಿದೆ.
ಇಂತಹ ಕನ್ನಡ ಸೇವೆ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು.

Write comment

busy
 
Log In | Join Now
Request a book!